Friday, November 4, 2011

ಬದುಕು ಭ್ರಮೆಗಳ ಒಂದು ತೋಟ. ಎಷ್ಟೊ ಭ್ರಮೆಗಳು ಸೇರಿ, ಒಂದು ವಾಸ್ತವಾಂಶದ ಅರಿವಿನ ಚಿತ್ರಣವನ್ನಾ ಮನಸ್ಸಿಗೆ ಕಟ್ಟಿಕೊಡುತ್ತವೆ... ಕಲ್ಪನೆಗಳಿಲ್ಲದೆ, ಭ್ರಮೆಗಳ ಹಂಗಿಲ್ಲದೆ ನಾವು ಬದುಕೊಓದು ತುಂಬಾ ಕಷ್ಟ.. ! ? . ಎಲ್ಲಾ ವಾಸ್ತವಾಂಶಗಳು ನಮ್ಮ ಅರಿವಿಗೆ ಬಂದ್ರೆ , ಬದುಕಲ್ಲೇನಿದೆ ಅನ್ನುವಂಥ ಪ್ರಶ್ನೆಗಳು ನಮ್ಮನ್ನ ಕಾಡೊದು ಸಹಜ ಅಲ್ವಾ ? . ದಾಸರು ಹೇಳಿದ ಹಾಗೆ ,"ಸಂಸಾರವೆನ್ನುವುದು ನೀರ ಮೇಲಣ ಗುಳ್ಳೆ " ನಿರಂತರ ಜನುಮ ತಳೆವ ಬುಗ್ಗೆಗಳು, ಒಂದ್ಕ್ಕೊಂದು ಜೋತೆ-ಜೋತೆಯಾಗಿ, ಜನುಮದ ಜೋಡಿಗಳಂತೆ ಇರುತ್ತವೆ , ಹಾಗೆ ಹುಟ್ಟುತ್ತವೆ , ಕ್ಶಣಕಾಲ ಸಂಚಲಿಸಿತ್ತವೆ ಮತ್ತು ಸತ್ತು ಬಿಡುತ್ತವೆ... ಸಾವು ಕೂಡ ಒಂದು ಭ್ರಮಾಲೋಕವನ್ನ ಸ್ರಷ್ಟಿಸಿ ಮನಸನ್ನ ತಲ್ಲಣಗೊಳಿಸ್ತ ಇರುತ್ತದೆ.
ಹಾಗೇ ನಿರಂತರ ಕಣ್ಣು-ಮುಚ್ಚಾಲೆಯಾಟ ನಡಿತಾನೆ ಇರುತ್ತದೆ...

ಇದೇ ಕಾರಣಕ್ಕೆ , ತಿಳಿದವರು ಕೂಡ, ಬದುಕನ್ನ ಭ್ರಮಾಲೋಕದಲ್ಲೆ ತೇಲಿಸಿಬಿಡುತ್ತಾರೆ , ತಮ್ಮ ಮಕ್ಕಳಲ್ಲಿ ಕೂಡ , ಕನಸಿನ ಬೀಜಗಳನ್ನಾ ಬಿತ್ತುತ್ತಾರೆ , ತಾವು ಕೂಡ ನಿರಂತರವಾಗಿ ಕನಸುಗಳನ್ನ ಕಾಣ್ತಾನೆ ಇರ್ತಾರೆ.

ಕೆಲವೋಂದು ಕನಸುಗಳು , ಇರುವೆಗಳ ಹುತ್ತದಂತೆ ಇರುತ್ತವೆ... ಇಲ್ಲಿ ಯಾರೊ ಕನಸುಗಳನ್ನ ಕಾಣೋರು.. ಆ ಕನಸಿನ ಅರಮನೆಯಲ್ಲಿ ಇನ್ನ್ಯಾರೊ ದರ್ಬಾರುಗಳನ್ನ ನಡೆಸ್ತ ಇರ್ತಾರೆ. ಹೀಗೆ ಈ ಕನಸುಗಳು ಸ್ರಷ್ಟಿಕ್ರಿಯಲ್ಲಿ , ಲೋಕ ಕಲ್ಯಾಣ ಕಾರ್ಯದಲ್ಲಿ ಮಹತ್ತರವಾದ ಪಾತ್ರಗಳನ್ನ ನಿರ್ವಹಿಸುತ್ತವೆ...


ಇಂದಲ್ಲ , ನಾಳೆ ನಾವೆಲ್ಲ ಸಾಯುವವರೆ , ಮತ್ತ್ಯಾಕೆ ? ನಮಗೆ ಈ ಲೋಕದ ನಂಟು ಅನ್ನುವವರಿಗೆ , ಈ ಕನಸುಗಳೆ ಮುಂದಿನ ದಾರೈಯನ್ನ ತೋರಿಸಿಕೊಡುತ್ತವೆ ಎನ್ನುವುದು ನನ್ನ ಅನಿಸಿಕೆ ... ಇನ್ನಷ್ಟು ವಿಶಯಗಳೋಂದಿಗೆ ನಾನು ನಿಮ್ಮೋಂದಿಗೆ ಮುಂದೆ... ನಮಸ್ತೆ ... :)

No comments:

Post a Comment