Friday, December 30, 2011

*ಪ್ರೇಮ- ಕುರುಡು- ಪ್ರೇಮ*

ವಾಸ್ತವ ಕವಿತೆಗಳಿಗೆ ಮೈ-ನವಿಲುಗಣ್ಣು ! ?...

ಅದಕೆ,

ಕಣ್ಣ್ಮುಚ್ಚಿ ಬರೆವೆ ಪ್ರೇಮಗವಿತೆ ಭಾವಗಳ ಬಣ್ಣದಿ ಅದ್ದಿ-ತಿದ್ದಿ ಸಿಂಗರಿಸಿ

ಅಂದಕೆ... :)

*ಪ್ರೇಮ- ಕುರುಡು- ಪ್ರೇಮ*

ವಾಸ್ತವ ಕವಿತೆಗಳಿಗೆ ಮೈ-ನವಿಲುಗಣ್ಣು ! ?... ಅದಕೆ, ಕಣ್ಣ್ಮುಚ್ಚಿ ಬರೆವೆ ಪ್ರೇಮಗವಿತೆ ಭಾವಗಳ ಬಣ್ಣದಿ ಅದ್ದಿ-ತಿದ್ದಿ ಸಿಂಗರಿ ಅಂದಕೆ... :)

Thursday, December 29, 2011

*ಕವಿತೆ*
ನಿನ್ನನು ಅರಸುತಾ ನಾನಲ್ಲೇಲ್ಲೋ
ಅಲೆಯುವ ಅಲೆಮಾರಿ ,

ನೀ ಹುಡುಕುವಾ ಬಳ್ಳಿ ಪಾದ(ಪದ)ಗಳಲಿ ಪವಡಿಸಿತೆನುವಾ ಸುಕುಮಾರಿ

Tuesday, December 27, 2011

*ಹನಿ ಸಂದೇಶ್*

ಹುಡುಗಿ ಕೈಕೊಟ್ಟಳೆಂದು ,
ತುಟ್ಟಿ ಸಿಗರೇಟನಾ ಎದೆಯೊಳಗೆ
ಭಟ್ಟಿ ಇಳಿಸಿದ,

ಕೆಮ್ಮು-ದಮ್ಮು ಬಂತೆಂದು
ವೈದ್ಯನ ಬಳಿ ಓಡಿದರೆ '
ದುಬಾರಿ ಬಿಲ್ ಕೊಟ್ಟು
"ಧೂಮಪಾನ ಆರೋಗ್ಯಕೆ ಹಾನಿಕರ" ವೆಂದು ವೈದ್ಯ ಬೆನ್-ತಟ್ಟಿ ಕಳಿಸಿದ :-)

Hani

*ಹನಿ ಸಂದೇಶ್*

ಹುಡುಗಿ ಕೈಕೊಟ್ಟಳೆಂದು ,
ತುಟ್ಟಿ ಸಿಗರೇಟನಾ ಎದೆಯೊಳಗೆ
ಭಟ್ಟಿ ಇಳಿಸಿದ,

ಕೆಮ್ಮು-ದಮ್ಮು ಬಂತೆಂದು
ವೈಧ್ಯನ ಬಳಿ ಓಡಿದರೆ '
ದುಬಾರಿ ಬಿಲ್ ಕೊಟ್ಟು
"ಧುಮಪಾನ ಆರೋಗ್ಯಕೆ ಹಾನಿಕರ" ವೆಂದು ವೈದ್ಯ ಬೆನ್-ತಟ್ಟಿ ಕಳಿಸಿದ :-)

Monday, December 26, 2011

*ನಾನಾದೆ ಅಪರಾಧಿ*

*ಶೋಕ ಶಾಕುಂತಲೆ*

ನಿನ್ನ ತನು ಮನ ಶಾಖ ಸೋಕಿ
ಮೈ ಮನ ಪುಳಕಿತ,
ಚಂಚಲ ಮನಸಿದು ಕುಸಿದು
ತನು ಬೆಸೆದು ಹಸಿದ
ಆಸೆಗಳಿಗೆ ಕ್ಷಣ-ಕ್ಷಣ ತರ್ಪಣ

ಉಂಡೆದ್ದು ಬರಿದಾಗಿ ಹೋದವ ನೀನು
ನೆನಪಿನ ಉಂಗುಷ್ಟವ ಪಡೆದವಳು ನಾನು...

ನೀನೀತ್ತ ಉಂಗುಷ್ಟ ಹಸ್ತದಲ್ಲಿತ್ತು
ಬಿತ್ತ ನೆನಪಿಗೆ ಕೈ-ಕಾಲು ಮೂಡಿತ್ತು..
ಜಗ ಜರಿಯುವಾ ಮುನ್ನವೇ,
ನಾ ನಿನ್ನವಳಾಗಬೇಕಿತ್ತು...

ನಾನ್ ಹೊರಟೆ ನಿನ್ನ ಮನದ ಅರಮನೆಯಂಗಳಗ್ಕೆ...


ಮುನಿಯ ಶಾಪವೋ...
ಕವಿಯ ಪಕ್ಷಪಾತವೋ...
ಇಲ್ಲಾ ಗಂಡಸರ ಸುಳ್ಳೇ ಹಾಳು ಮರೆವೋ...
ಉಂಗುಷ್ಟ ನದಿಯಲಿ ಬಿತ್ತು ನಿನಗೋ ಮರೆವು ಕಾಡಿತ್ತು

ಎಡವಿದ್ದು ಜೋಡಿ ಮನಗಳಾದರೂ ಶಿಕ್ಷೆಯ ಅನುಭವ ಮಾತ್ರ ನನ್ನೊಂಟಿ- ಕಾಲ್ಗಳಿಗೆ
ನಾನಾದೆ ಅಪರಾಧ
*ನಾನಾದೆ ಅಪರಾಧಿ*

*ಶೋಕ ಶಾಕುಂತಲೆ*

ನಿನ್ನ ತನು ಮನ ಶಾಖ ಸೋಕಿ
ಮೈ ಮನ ಪುಳಕಿತ,
ಚಂಚಲ ಮನಸಿದು ಕುಸಿದು
ತನು ಬೆಸೆದು ಹಸಿದ
ಆಸೆಗಳಿಗೆ ಕ್ಷಣ-ಕ್ಷಣ ತರ್ಪಣ

ಉಂಡೆದ್ದು ಬರಿದಾಗಿ ಹೋದವ ನೀನು
ನೆನಪಿನ ಉಂಗುಷ್ಟವ ಪಡೆದವಳು ನಾನು...

ನೀನೀತ್ತ ಉಂಗುಷ್ಟ ಹಸ್ತದಲ್ಲಿತ್ತು
ಬಿತ್ತ ನೆನಪಿಗೆ ಕೈ-ಕಾಲು ಮೂಡಿತ್ತು..
ಜಗ ಜರಿಯುವಾ ಮುನ್ನವೇ,
ನಾ ನಿನ್ನವಳಾಗಬೇಕಿತ್ತು...

ನಾನ್ ಹೊರಟೆ ನಿನ್ನ ಮನದ ಅರಮನೆಯಂಗಳಗ್ಕೆ...


ಮುನಿಯ ಶಾಪವೋ...
ಕವಿಯ ಪಕ್ಷಪಾತವೋ...
ಇಲ್ಲಾ ಗಂಡಸರ ಸುಳ್ಳೇ ಹಾಳು ಮರೆವೋ...
ಉಂಗುಷ್ಟ ನದಿಯಲಿ ಬಿತ್ತು ನಿನಗೋ ಮರೆವು ಕಾಡಿತ್ತು

ಎಡವಿದ್ದು ಜೋಡಿ ಮನಗಳಾದರೂ ಶಿಕ್ಷೆಯ ಅನುಭವ ಮಾತ್ರ ನನ್ನೊಂಟಿ- ಕಾಲ್ಗಳಿಗೆ
ನಾನಾದೆ ಅಪರಾಧ

Shoka shaakuntale

*ನಾನಾದೆ ಅಪರಾಧಿ*

*ಶೋಕ ಶಾಕುಂತಲೆ*

ನಿನ್ನ ತನು ಮನ ಶಾಖ ಸೋಕಿ
ಮೈ ಮನ ಪುಳಕಿತ,
ಚಂಚಲ ಮನಸಿದು ಕುಸಿದು
ತನು ಬೆಸೆದು ಹಸಿದ
ಆಸೆಗಳಿಗೆ ಕ್ಷಣ-ಕ್ಷಣ ತರ್ಪಣ

ಉಂಡೆದ್ದೂ ಬರಿದಾಗಿ ಹೋದವ ನೀನು
ನೆನಪಿನ ಉಂಗುಷ್ಟವ ಪಡೆದವಳು ನಾನು...

ನೀನೀತ್ತ ಉಂಗುಷ್ಟ ಹಸ್ತದಲ್ಲಿತ್ತು
ಬಿತ್ತ ನೆನಪಿಗೆ ಕೈ-ಕಾಲು ಮೂಡಿತು..
ಜಗ ಜರಿಯುವಾ ಮುನ್ನವೇ,
ನಾ ನಿನ್ನವಳಾಗಬೇಕಿತ್ತು...

ನಾನ್ ಹೊರಟೆ ನಿನ್ನ ಮನದ ಅರಮನೆಯಂಗಳಗ್ಕೆ...


ಮುನಿಯ ಶಾಪವೋ...
ಕವಿಯ ಪಕ್ಷಪಾತವೋ...
ಎಡವಿದ್ದು ಜೋಡಿ ಮನಗಳಾದರೂ ಶಿಕ್ಷೆಯ ಅನುಭವ ಮಾತ್ರ ನನ್ನೊಂಟಿ- ಕಾಲ್ಗಳಿಗೆ
ನಾನಾದೆ ಅಪರಾಧಿ

Saturday, December 24, 2011

*ದೂರದ ಬೆಟ್ಟ*

ದೂರದ ಬಾನಂಗಳದ ಬೆಳದಿಂಗಳ ಚಂದಿರ ನೋಡಲು ಬಲು ಸುಂದರ....

ಆದರೂ

ಹತ್ತಿರದಿ ನೋಡಿದರೆ
ಅವನಲ್ಲೂ ಇವೆಯಲ್ಲಾನೂರಾರು
ಕಂದರ(ಕ)ಗಳ ಹಂದರ @ಸಪ್ತವಣ೯

*ಗಾದೆ ಹನಿ*

ದೂರದ ಬಾನಂಗಳದ ಬೆಳದಿಂಗಳ ಚಂದಿರ ನೋಡಲು ಬಲು ಸುಂದರ....

ಆದರೂ

ಹತ್ತಿರದಿ ನೋಡಿದರೆ
ಅವನಲ್ಲೂ ಇವೆಯಲ್ಲಾನೂರಾರು

ಕಂದರ(ಕ)ಗಳ ಹಂದರ @ಸಪ್ತವಣ೯

*ಗಾದೆ ಹನಿ*

*ಗಾದೆ ಹನಿ*

ಒಲ್ಲದ ಗ0ಡನಿಗೆ ,ಮೊಸರಲ್ಲು ಕಲ್ಲು...

ಅಯ್ಯೋ !!

ಮೊನ್ನೆ ಹೀಗೇ ಹೇಳಿದಕ್ಕೆ,

ಹೊಡೆದು ಉದುರಿಸಿಬಿಟ್ಲುರೀ

ನನ್ನೇಹೆಂಡ್ತಿ ನ0ದೇರಡ್ ಹಲ್ಲು

*ಗಾದೆ ಹನಿ*

ಒಲ್ಲದ ಗ0ಡ್ನಿಗೆ ,ಮೊಸರಲ್ಲು ಕಲ್ಲು...

ಅಯ್ಯೋ !!

ಮೊನ್ನೆ ಹೀಗೆ ಹೇಳಿದಕ್ಕೆ,

ಹೊಡೆದು ಉದುರಿಸಿಬಿಟ್ಲುರೀ

ನನ್ನೇಂಡ್ತಿ ನ0ದೇರಡ್ ಹಲ್ಲು

Wednesday, December 21, 2011

ನೆನಪು

ಅತ್ತ ರಾತ್ರಿಯ ನೆನಪುಗಳ , ಕರುಳ ಬಳ್ಳಿಯನು ಕತ್ತರಿಸಿಟ್ಟು ಬಿಟ್ಟಿದ್ದೇನೆ..

ಅವೋ !!

ಹಲ್ಲಿಯ ಬಾಲದಂತೆ ಮತ್ತೇ ಕಾಲನ ಜೋತೆ ಚಿಗುರಿಕೊಂಡು ಬಿಟ್ಟಿವೆ..

Monday, December 19, 2011

*ಕಾಂಚಾಣ*

ಕಾಸಿದ್ರೆ ಕೈಲಾಸ

ಎಂದವರು, ಕೆಲವರು

ಪಾಪ !!

ಅಪಾರ್ಥ ಮಾಡಿಕೊಂಡನೋ ಏನೋ !!

ಕೊನೆವರೆಗೂ ಕಾಸು ಕೂಡಿಟ್ಟ

ಬರಿಗೈಲಿ ಕೈಲಾಸಕೆ ಕಾಲಿಟ್ಟ..

Friday, December 16, 2011

*ಇಲ್ಲೋಬ್ಬ ದೇವದಾಸ*

ಅವನಿಗೋ ಸದಾ ಕುಡಿಯುವಾ ಹಪಾಹಪಿ...

ನೆಪ ಮಾತ್ರಕೆ

ನಾಲಿಗೆಯಲಿ ಅವಳ

ನಾಮದ ನೆನಪಿನ ಜಪ

Thursday, December 8, 2011

ಧ್ವಂದ್ವ

*ಮೌನ ಮಂಟಪ*

*ಮಾತಿನ ಮನೆ*

ಮಾತನಾಡದ ಮೌನವೊಂದು ಮಾತನಾಡದೆ ಮೌನವಾಗಿದೆ..

ಕಳಚಿಟ್ಟ ಕಾಲ ಕೌತುಕ ಕಾತರಿಸಿ ಕತ್ತೇರಿದೆ ಕಣ್ಣೇರಿಸಿದೆ...

ನೀಗಲಾರದ ನಿಲುವುಗಳಿಗೆ ನಿಲುಕಿ
ನಯನಗಳ ನೀರೀಕ್ಷೆ ನೂರ್ಮಡಿಸಿದೆ.

ಗರಿಗೆದರದ ಗುರಿಯ ಗೆಜ್ಜೆ
ಗಮ್ಯಗಳ ಗವಿಯೊಳಗೆ ಗುಂಯ್ಗುಟ್ಟಿವೆ..

ಸೇರಲಾರದ ಸವಿನುಡಿಗಳು ಸೇರಲಾರದೆ ಸೇರಿ ಸವಿಯಸೂರೊಂದನಾ ಸೂರೆಮಾಡಿವೆ..
********

ಒಂದು ವಿಭಿನ್ನ ಪ್ರಯತ್ನ... ಒಂದೇ ಕವಿತೆಯಲ್ಲಿ ಎರಡು ಭಾವಗಳನ್ನಾ (ಅಭಾಸಗಳನ್ನಾ) ಹೊರಹೊಮ್ಮಿಸುವಾ ಪುಟ್ಟ ಪ್ರಯತ್ನ.. ನಿಮಗೇನನ್ನಿಸಿತು ! ?

Wednesday, December 7, 2011

*ಕಲ್ಪನ ಬಯಕೆಗಳು..*

ತೆರೆದ ಮನಕೆ ಎತ್ತರಕೆ

ಹಾರುವ ಬಯಕೆ ,

ರೆಕ್ಕೆಗಳಿರುವುದು ಕಲ್ಪನೆ

ಕನಸುಗಳಿಗೆ ಹೊರತು

ವಾಸ್ತವವಗಳಿಗಲ್ಲವೆಂಬುವುದೆ

ಹೆದರಿಕೆ...

Friday, December 2, 2011

*ಕಾದಿಹಳು ರಾಧ*

ಮುರಳಿ ಮರಳಿ

ಬರುವನೆಂದು ಕಾದಿಹಳು

ರಾಧ.

ಜಗವನೆ

ಜಗಮಗಿಸಿದ

ಜಗದೊದ್ಧಾರ

ಮರೆತು ಹೋದುದು

ವಿಷಾದ

Thursday, December 1, 2011

*ಕುಸುರಿ*

ಹಸಿವೆಂಬ ಬಸಿರಿಗೆ ,

ನಿತ್ಯ ನೆಡೆಸಬೇಕು ಕಸರತ್ತು...


ಕಾಯ ಕುಸುರಿ ನೆಡೆಸಿದರಷ್ಟೇ

ಉದರಕ್ಕೊಂದು ತುತ್ತು...

Monday, November 28, 2011

*ಮತ್ತೋಂದು ಮುಂಜಾವು*

ಕಳೆದ ರಾತ್ರಿಯ ಸುಖದ ಅಮಲು

ತೊಳೆದು ಮೂಡಿ ಬಂದಿದೆ

ಮತ್ತೋಂದು ಹಗಲು ....

ಮೂಡಣದಿ ಮೌಡ್ಯಗಳ

ಕೊಳೆಯ ತೊಳೆಯಲು ಮುಗಿಲು

ಜೊತೆಯ ನೀಡಿದೆ ದಿನಕರಗೆ

ಹೆಗಲು.

Sunday, November 27, 2011

*ಇನ್ನಾಗದು*
ನಾವಿಲ್ಲದೂರಿನಲ್ಲಿ ನೀವು ಅದು ಹೇಗೆ ತಾನೆ ಇರುವಿರಿ ?
ನಮ್ಮ ಮುಗ್ಧ ಕಣ್ಣುಗಳು ಬೇಕೆ ಬೇಕು ತಾನೆ ? ನಿಮಗೆ ಕಿತ್ತುಕೊಳ್ಳಲು...

ನಮ್ಮ ಮೌನವನೆ ತಾನೆ ?
ನೀವು ದುರ್ಬಲತೆ ಎಂದುಕೊಂಡದ್ದು
ನಮ್ಮಿಚ್ಚೆ ಇಲ್ಲದೆನೆ ದುರ್ಬಳಕೆ ಮಾಡಿಕೊಂಡಿದ್ದು...

ಇನ್ನದೇಷ್ಟು ಅತ್ಯಾಚಾರಗಳನ್ನಾ ನಾವು ಕತ್ತಲ ಕೋಣೆಯೊಳಗೆ ಮೌನದ ಬೀಗವನ್ನಾ ಅಡವಿಟ್ಟು ಸುಮ್ಮನಾಗಿರಿಸಬೇಕು... ? ಅದು ಇನ್ನಾಗದ ಮಾತು ಎಚ್ಚೆತ್ತುಗೊಂಡಿದೆ ನಮ್ಮ ನರಸತ್ತ ಧಾತು

Monday, November 21, 2011

*ಭಾಷೆ*

ಮುದ್ದು ಮುಂಜಾನೆಯೊಂದು

ಸದ್ದಿರದೆ ಅರಳಿದೆ


ಮರಳಿ ಬರುವಾ

ಭರವಸೆಯ

ಭಾಷೆಯಿಂದು ಮತ್ತೆ

ನೆರವೇರಿದೆ.

Saturday, November 19, 2011

*ನೀರೀಕ್ಷೆ*

ಮುರಿದ ಮನೆಯೊಳಗೆ
ಮೆಲ್ಲನೆ ಮುಲುಕಾಡುತಿವೆ...
ಮೌನವ ಮರೆತ ಮಾತುಗಳು...

ಕಾದು ಕಂಪಿಸುತ್ತಿವೆ
ಕಾಲದ ಕಣ್ಣು...
ಕುಳಿತಲ್ಲೆ ಕುಪ್ಪಳಿಸುತ್ತಿವೆ
ಕಾತುರದ ಕಾಲುಗಳು...


ಮಾತು ಮುರಿಯದೆ ಬರುವನೆ ?
ಬಿಲ್ಲು ಮುರಿದು ಜಾನಕಿಯ ವರಿಸಿದ ರಾಮ...
ಕಾದು ಕುಳಿತ ಶಬರಿಯ
ಅಕ್ಷಿಯ ನೀರೀಕ್ಷೆಯನು
ಹುಸಿಗೊಳಿಸದೆ...

Wednesday, November 16, 2011

*ಪ್ರಭುವೇ ನೀ ಹೇಳು*
ವೇಷಧಾರಿಗಳು ಬಂದರು ದಾರಿ ಬಿಡಿ ,

ಭುವಿಯನಾಳೋ ಸಾಮಂತರು ಬಂದರು, ಮರ್ಯಾದೆ ಕೊಡಿ.

ಹೊರಲು ಸಿದ್ಧ ಕೈಯಲಿ ಹೊರೆಯಾ , ಕಿತ್ತೆಸೆದು ಮುಡಿದ ಹೂವನು .,
ಸಕಲಕಲಾವಲ್ಲಭರಿವರು..

ಒಬ್ಬಗೆ ಒಂದು ಪಾತ್ರವಲ್ಲ ಮೀಸಲು ,
ಇವು , ನಿತ್ಯವೂ ಹೊರಡುತ್ತವೆ ಹೊಸತೊಂದು ಅಂಡು ಮೂಸಲು.,

"ಕೊಟ್ಟವೊ ಕೊಂಡವೊ ಅರಿವಿಲ್ಲದ ಜನಗಳು , ಪರಿಹಾರಕ್ಕಾಗಿ ಕಾಯುತ್ತಿವೆ ,
ಮತ ಪ್ರಭುವಿನ ಸೋತ ಕಂಗಳು.

ಎಷ್ಟೋ ವಾಸಿ ನಿತ್ಯಯೌವನೆಯ ಕನಸುಗಳು ,
ಅವಾದರೋ ಗಂಟು ಕಳಚುವವರೆಗಾದರೂ, ಅವಳದೇ ಕೂಸುಗಳು,

ಈವು ಕಾಸಿನ ಕಾವಿಗೆ, ಕರಗುವಾ ಅರಗಿನ ಪ್ರತಿಮೆಗಳು,
ಕ್ಷಣ-ಕ್ಷಣಕು , ಮಗ್ಗಲು ಮಗಚುವಾ ಮನಸುಗಳು..

"ಕಾರ್ಯವಾಸಿ ಕತ್ತೆ ಕಾಲು "

ಹಿಡಿಯುವದರೊಳಗೆ , ಕುದುರೆ ಜಿಗಿತದ ಗೋಳು ...

ಸಮಸ್ಯೆಗಳದೆ ಬಸಿರು ಸಾಲು ಸಾಲು ,
ಬಯಕೆಯ ಮಡಿಲಿಗೆ ಬಳೆ ತೊಡಿಸುವವರ್ಯಾರು ?


ಪ್ರಭವೇ ನೀ ಹೇಳು

(ಹಿಂದೊಮ್ಮೆ ಬರೆದದ್ದು )

Wednesday, November 9, 2011

*ಕಲ್ಪಕ ಕವಿತೆಗಳು*2

*ಕಲ್ಪಕ ಕವಿತೆಗಳು*2

ಪ್ರೀತಿ , ನೀ ಶುಭ್ರ ಮಂಜಿನಂತೆಂದು ತಿಳಿದು,

ಎತ್ತಿಟ್ಟುಕೊಂಡೆ ಹ್ರದಯದಲಿ ...

ನೀ ಕ್ಷಣ ಕ್ಷಣಕೂ

ಕರಗಿ ನಿರಾಸೆ

ಮೂಡಿಸಿದೆ ಜೀವನದಲಿ

Friday, November 4, 2011

* ಜನನ *

ಮನಸೇ ಜನಕ

ಮೌನವೆ ಜನಕಿ

ಇವರಿರ್ವರ ಮಿಲನಕೆ

ಜನಿಸಿದ

ಪದಗಳೇ ಕವಿತೆ
ಬದುಕು ಭ್ರಮೆಗಳ ಒಂದು ತೋಟ. ಎಷ್ಟೊ ಭ್ರಮೆಗಳು ಸೇರಿ, ಒಂದು ವಾಸ್ತವಾಂಶದ ಅರಿವಿನ ಚಿತ್ರಣವನ್ನಾ ಮನಸ್ಸಿಗೆ ಕಟ್ಟಿಕೊಡುತ್ತವೆ... ಕಲ್ಪನೆಗಳಿಲ್ಲದೆ, ಭ್ರಮೆಗಳ ಹಂಗಿಲ್ಲದೆ ನಾವು ಬದುಕೊಓದು ತುಂಬಾ ಕಷ್ಟ.. ! ? . ಎಲ್ಲಾ ವಾಸ್ತವಾಂಶಗಳು ನಮ್ಮ ಅರಿವಿಗೆ ಬಂದ್ರೆ , ಬದುಕಲ್ಲೇನಿದೆ ಅನ್ನುವಂಥ ಪ್ರಶ್ನೆಗಳು ನಮ್ಮನ್ನ ಕಾಡೊದು ಸಹಜ ಅಲ್ವಾ ? . ದಾಸರು ಹೇಳಿದ ಹಾಗೆ ,"ಸಂಸಾರವೆನ್ನುವುದು ನೀರ ಮೇಲಣ ಗುಳ್ಳೆ " ನಿರಂತರ ಜನುಮ ತಳೆವ ಬುಗ್ಗೆಗಳು, ಒಂದ್ಕ್ಕೊಂದು ಜೋತೆ-ಜೋತೆಯಾಗಿ, ಜನುಮದ ಜೋಡಿಗಳಂತೆ ಇರುತ್ತವೆ , ಹಾಗೆ ಹುಟ್ಟುತ್ತವೆ , ಕ್ಶಣಕಾಲ ಸಂಚಲಿಸಿತ್ತವೆ ಮತ್ತು ಸತ್ತು ಬಿಡುತ್ತವೆ... ಸಾವು ಕೂಡ ಒಂದು ಭ್ರಮಾಲೋಕವನ್ನ ಸ್ರಷ್ಟಿಸಿ ಮನಸನ್ನ ತಲ್ಲಣಗೊಳಿಸ್ತ ಇರುತ್ತದೆ.
ಹಾಗೇ ನಿರಂತರ ಕಣ್ಣು-ಮುಚ್ಚಾಲೆಯಾಟ ನಡಿತಾನೆ ಇರುತ್ತದೆ...

ಇದೇ ಕಾರಣಕ್ಕೆ , ತಿಳಿದವರು ಕೂಡ, ಬದುಕನ್ನ ಭ್ರಮಾಲೋಕದಲ್ಲೆ ತೇಲಿಸಿಬಿಡುತ್ತಾರೆ , ತಮ್ಮ ಮಕ್ಕಳಲ್ಲಿ ಕೂಡ , ಕನಸಿನ ಬೀಜಗಳನ್ನಾ ಬಿತ್ತುತ್ತಾರೆ , ತಾವು ಕೂಡ ನಿರಂತರವಾಗಿ ಕನಸುಗಳನ್ನ ಕಾಣ್ತಾನೆ ಇರ್ತಾರೆ.

ಕೆಲವೋಂದು ಕನಸುಗಳು , ಇರುವೆಗಳ ಹುತ್ತದಂತೆ ಇರುತ್ತವೆ... ಇಲ್ಲಿ ಯಾರೊ ಕನಸುಗಳನ್ನ ಕಾಣೋರು.. ಆ ಕನಸಿನ ಅರಮನೆಯಲ್ಲಿ ಇನ್ನ್ಯಾರೊ ದರ್ಬಾರುಗಳನ್ನ ನಡೆಸ್ತ ಇರ್ತಾರೆ. ಹೀಗೆ ಈ ಕನಸುಗಳು ಸ್ರಷ್ಟಿಕ್ರಿಯಲ್ಲಿ , ಲೋಕ ಕಲ್ಯಾಣ ಕಾರ್ಯದಲ್ಲಿ ಮಹತ್ತರವಾದ ಪಾತ್ರಗಳನ್ನ ನಿರ್ವಹಿಸುತ್ತವೆ...


ಇಂದಲ್ಲ , ನಾಳೆ ನಾವೆಲ್ಲ ಸಾಯುವವರೆ , ಮತ್ತ್ಯಾಕೆ ? ನಮಗೆ ಈ ಲೋಕದ ನಂಟು ಅನ್ನುವವರಿಗೆ , ಈ ಕನಸುಗಳೆ ಮುಂದಿನ ದಾರೈಯನ್ನ ತೋರಿಸಿಕೊಡುತ್ತವೆ ಎನ್ನುವುದು ನನ್ನ ಅನಿಸಿಕೆ ... ಇನ್ನಷ್ಟು ವಿಶಯಗಳೋಂದಿಗೆ ನಾನು ನಿಮ್ಮೋಂದಿಗೆ ಮುಂದೆ... ನಮಸ್ತೆ ... :)

Saturday, October 29, 2011

ಶೌಖತ್ ಅಲಿಯ

ದುಖಾನಿನಲಿ ,

ಕೊಕ್ಕೆಯಲಿ ಸಿಕ್ಕು

ಬಿಕ್ಕುವಂತಿದೆ...

ನಮ್ಮ ಸಾಕು ಪ್ರಾಣಿಯ

ಮೂಕ ಶೋಕ-ವೆEದನೆ,


ಅವರದೋ ಹೊಟ್ಟೆಪಾಡಿನ

ವ್ಯಾಪಾರ !!

ನಮ್ಮದು ?!

ಇದೇನಾ ?ರಿI

ಸಂಸ್ಕಾರ ???
ಅಳಿಸಿ ಹೋದ ಹೆಜ್ಜೆ-ಗುರುತುಗಳ ಹಿಂಬಾಲಿಸಿ ,

ವಿಳಾಸಗಳ ಸುಳಿವಿಲ್ಲದೆ

ಭ್ರಮ-ನಿರಸರಾದವರು ನಾವು...,

ಕತ್ತಲ ರಾತ್ರಿಯಲಿ
ಕಳೆದುಹೋದವರನು' ,
ಕತ್ತಿಗೆ ಮುಸುಕು ಹಾಕಿ

ಕತ್ತಲಲ್ಲೇ ಹುಡುಕ
ಹೊರಟವರು ನಾವು ,


ನಾವು ವಿಳಾಸವಿಲ್ಲದವರು,

ದಯವಿಟ್ಟು ಹುಡುಕ ಬೇಡಿ ,

ನಮ್ಮ ಪಾದಗಳನು

ಪದಗಳಲಿ...

ಅಲೆಮಾರಿ ಆತ್ಮದ

ಅಲೆಗಳು ನಾವು...


ಹೆಸರಿಗೊಂದು ಉಸುಕ

ಮನೆಯಮಾಡಿ ,

ಉಸಿರು ಬಸಿರಾಗೊವರೆಗು

ಕಾದು , ಯಾರದೊ ,

ಮೂಸೆಯೊಳಗೆ ಸೋಸಿ ಹಾಯ್ದು
ಬಂದ ಧರಣಿಯ ಬಿಟ್ಟು,

ಹೋದ ವಿಳಾಸಗಳು ಸುಳಿಯು

ಕೊಡದೆ ಹೊರಟವರು

ನಾವು,

ದಯವಿಟ್ಟು ಹುಡುಕಬೇಡಿ

ನಮ್ಮ ವಿಳಾಸಗಳ ,

ಅನಿವಾಸಿಗಳು ನಾವು...

ತಾವಿಲ್ಲದವರ ಹುಡುಕ


ಬೇಡಿ ತಾವು...

Saturday, October 15, 2011

*ಕಲ್ಪಕ ಕವಿತೆಗಳು -1*

ಎಲ್ಲರೆಂದರು, ಅವಳು

ಮರುಭೂಮಿಯ ಮರಳು,

ಹಿಂಬಾಲಿಸಬೇಡ

ಮರುಳುನಾಗುವೆ.

"ನಾನೆಂದೆ,

ಮರುಳನಾದರು

ಪರವಾಗಿಲ್ಲ, ನಾ

ನಲ್ಲೆಗಾಗಿ, ನಾನಲ್ಲೆ


ಮರಳಾಗುವೆ...

(ಅವಳು- ಜೀವನ , ಗುರಿ)

Wednesday, October 12, 2011

*ಹೋರಾಟಗಾತಿ*

ಕೆಸರು ಕೊಳದಲಿ

ಬಸಿರು ಹೊತ್ತವಳ,

ನಡೆಯೆಂದಾಂತಾಯ್ತು

ಜೀವನ...

ಹೂತರು ಕಾಲು ,

ಸೋತವಳಲ್ಲ ಅವಳು,

ಹೊತ್ತ ಕಂದಗೆ

ಜಗದ ಬೆಳಕ ತೋರಿಸುವಾ,

ಬಯಕೆಯವಳಿಗೆ.

Thursday, September 15, 2011

ಕರಗೊ ಕತ್ತಲೆ

ಮರುಗಬೇಡ...

ನಿನಗೆ ನಾಳೆಯು ಜನನದ

ನಗುವಿದೆ... ಬೆಳಕಿನಂತೆ :-)

Friday, August 26, 2011

[ ಸೊಳ್ಳೆ ಪುರಾಣ] ಸಭಾಂಗಣದಲ್ಲಿ ಉಪನ್ಯಾಸಕ ದೊಡ್ಡ-ದೊಡ್ಡ ಡೈಲಾ ಗ್ ಡೆಲಿವರಿಮಾಡ್ತಾ "ಪ್ರಾಣಿ ಹಿಂಸೆ ಮಾಡಬಾರದು ಹಾಗೇ ಹೀಗೆ "ಅಂತಿದ್ರು.... ಆ ಸಭೆಗೆ ಒಂದುಸೊಳ್ಳೆ ಕೂಡ ಬಂದಿತ್ತು.. ಸರಿಯಾಗಿ ಕೇಳಿಸ್ತಿಲ್ಲಾಂತ ಅವರ ಹತ್ರಾನೆ ಹೋಯ್ತು.. ಉಪನ್ಯಾಸಕರಿಗೆ ಸೊಳ್ಳೆ ಯಾಕೊ ತುಂಬಾ ನಾಟಕ ಮಾಡ್ತಿದೆ ಅನಿಸ್ತು... ಚಟಾರಂತ ಒಂದು ಪೆಟ್ಟುಕೊಟ್ರು..... ಪಾಪ ಸೊಳ್ಳೆ ಕಮಕ್ ಕಿಮಕ್ ಕೂಡ ಮಾಡ್ದೆ ಸತ್ತೋಗಬಿಡ್ತು:)@ಸಪ್ತವಣ೯

ದೂರದ ಬಾನಂಗಳದ ಬೆಳದಿಂಗಳ ಚಂದಿರ ನೋಡಲು ಬಲು ಸುಂದರ....ಆದರೂಹತ್ತಿರದಿ ನೋಡಿದರೆ ಅವನಲ್ಲು ಇವೆಯಲ್ಲಾನೂರಾರು ಕಂದರಗಳ ಹಂದರ @ಸಪ್ತವಣ೯